ಮರಗಿಡಬಳ್ಳಿಗಳ ಅನೇಕ ಹೆಸರುಗಳಲ್ಲಿ "ತರು" ಎಂಬುದೂ ಒಂದು, ತರು-ಎಂದರೆ ದಾಟುವುದು ಎಂದು: ಏನನ್ನು ದಾಟುವುದು?... ದುಃಖವನ್ನು ದಾಟುವುದು; ಆಪತ್ತುಗಳಿಂದ ಮುಕ್ತವಾಗುವುದು ಎಂದರ್ಥ. ಮರಗಿಡಬಳ್ಳಿಗಳೂ, ವೃಕ್ಷಗಳೂ ತಮ್ಮ ಗುಣ, ವೀರ್ಯ, ಪ್ರಭಾವಗಳಿಂದ-ಮಾನವನ ದುಃಖವನ್ನು ಪರಿಹರಿಸುತ್ತವೆ; ತಾರಣಮಾಡುತ್ತವೆ; ಆದುದರಿಂದ ಅದಕ್ಕೆ 'ತರು' ಎಂದರು. ಅಮೃತವೆಂಬುದು ವನೌಷಧಿಗಳ ಇನ್ನೂಂದು ಹೆಸರು. ಈ ವನೌಷಧಿಯಲ್ಲಿ ವನಸ್ಪತಿ, ವೃಕ್ಷ, ವೀರುಧ ಮತ್ತು ಔಷಧಗಳೆಂಬ ನಾಲ್ಕು ಭೇದಗಳುಂಟು. ಮಾನವನನ್ನು ಸಾವಿನಿಂದ ತಪ್ಪಿಸುವ, ಕಷ್ಟ ದುರಂತ ಗಳಿಂದ ಪಾರುಮಾಡುವ ಇಂತಹ ವನೌಷಧಿಗಳು ಅಮೃತವಲ್ಲದೆ ಮತ್ತೇನು?
No comments:
Post a Comment